Sunday, April 26, 2015

ಪ್ರಕೃತಿಯ ವಿಕೋಪ

ಮನೆ ಕಟ್ಟಿದರು
ಅರಮನೆ ಕಟ್ಟಿದರು
ಪ್ರೀತಿಗೋಸ್ಕರ ತಾಜಾ ಮಹಲ್ ಕಟ್ಟಿದರು
ಕನಸು ಕಟ್ಟಿದರು
ನನಸು ಮಾಡಿ ಮೆರೆದರು 
ಅಹಂ ನೆತ್ತಿಗೇರಿ ದೇವರನ್ನೂ ಮರೆದರು
ಮನುಜರೆ ಮಾನವೀಯತೆಯ ವೈರಿಯಾದರು
ಆದರೆ ಪ್ರಕೃತಿಯ ವಿಕೋಪದ ಮುಂದೆ ನಡೆಯದು ಈ ಎಲ್ಲ ಆಟ
ನಾಲ್ಕು ದಿನದ ಜೀವನ ನಾಲ್ಕು ದಿನದ ವೈವಾಟ
ನಮ್ಮ ಕೈಯಲ್ಲಿಯೇ ಇದೆ ನಮ್ಮ ಕರ್ಮ ಧರ್ಮ
ಎಂದೂ ಮರೆಯದಿರಿ ಈ ಜೀವನದ ಮರ್ಮ
ಕೇವಲ ಕೆಲವೇ ಸೆಕೆಂಡ್ ಬೇಕು ಎಲ್ಲವೂ ಮುಗಿಯಲು
ಉಸಿರು ಉಳಿಯದು ನಂತರ ಪಶ್ಚಾತಾಪ ಪಡೆಯಲು
by ಹರೀಶ್ ಶೆಟ್ಟಿ, ಶಿರ್ವ

1 comment:

  1. ನಿಜ ಪ್ರಕೃತಿ ವಿಕೋಪದ ಮುಂದೆ ನಾವೆಷ್ಟರವರು!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...