Saturday, September 13, 2014

ಈದ್ ಜಾತ್ರೆ ಭಾಗ - ೪

ಈದ್ ಜಾತ್ರೆ
ಭಾಗ - ೪


ನಮಾಜ್ ಮುಗಿಯಿತು, ಜನರು ಪರಸ್ಪರರನ್ನು ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು, ಬಳಿಕ ಮಿಠಾಯಿ ಹಾಗು ಆಟಿಕೆಯ ಅಂಗಡಿಗಳನ್ನು ಜನರು ಮುತ್ತಿಕೊಂಡರು, ಗ್ರಾಮೀಣರ ಈ ತಂಡ ಈ ವಿಷಯದಲ್ಲಿ ಬಾಲಕರಿಂದ ಕಡಿಮೆಯೇನು ಉತ್ಸಾಹದಲ್ಲಿ ಇರಲಿಲ್ಲ, ಇದು ನೋಡಿ ತಿರುಗು ತೊಟ್ಚಿಲ, ಒಂದು ಪೈಸೆ ಕೊಟ್ಟು ಕುಳಿತುಕೊಳ್ಳಿ, ಕೆಲವೊಮ್ಮೆ ಆಕಾಶದಲ್ಲಿ ತೇಲಿದಂತೆ ಬಾಸವಾಗುವುದು, ಕೆಲವೊಮ್ಮೆ ಭೂಮಿಗೆ ಬಿದ್ದಂತೆ ಬಾಸವಾಗುವುದು. ಇದು ತಿರುಗುವ ಚಕ್ರಮರದ ಆನೆ, ಕುದುರೆ, ಒಂಟೆ ಯಾವುದರಲ್ಲೂ ಬೇಕಾದರೆ ಒಂದು ಪೈಸೆ ಕೊಟ್ಟು ಸವಾರಿ ಮಾಡಿ, ಮಹಮೂದ್, ಮೋಹಸಿನ, ನೂರೆ ಮತ್ತು ಸಮ್ಮಿ ಕುದುರೆ ಮತ್ತು ಒಂಟೆಯ ಮೇಲೆ ಕುಳಿತು ಕೊಳ್ಳುತ್ತಾರೆ, ಹಮೀದ್ ದೂರ ನಿಂತು ನೋಡುತ್ತಿದ್ದಾನೆ, ಅವನ ಹತ್ತಿರ ಕೇವಲ ಮೂರು ಪೈಸೆ ಇದೆ, ಸ್ವಲ್ಪವೇ ಕ್ಷಣ ಆ ತಿರುಗುವ ಚಕ್ರದ ಮೇಲೆ ಕುಳಿತು ಸುತ್ತು ಬರಲು ಬಳಿ ಇದ್ದ ಹಣದ ಮೂರರ ಒಂದು ಪಾಲು ಕೊಡಲು ಅವನಿಗೆ ಇಷ್ಟವಿರಲಿಲ್ಲ.

ಎಲ್ಲರು ತಿರುಗುವ ಚಕ್ರದಿಂದ ಕೆಳಗೆ ಇಳಿದರು, ಈಗ ಆಟಿಕೆ ಖರೀದಿ ಮಾಡುವ, ಎಲ್ಲರು ಆಟಿಕೆ ಅಂಗಡಿಯತ್ತ ನಡೆದರು, ಬಗೆ ಬಗೆಯ ಆಟಿಕೆಗಳು, ಸಿಪಾಯಿ, ಸಾಧು, ಮಡಿವಾಳ, ನೀರು ವಾಹಕ, ವಕೀಲ, ಗಿಳಿ, ಬೆಕ್ಕು ವಾಹ! ನಾಯಿ ಸುಂದರ ಸುಂದರ ಆಟಿಕೆಗಳು, ಮಹಮೂದ್ ಸಿಪಾಯಿ ತೆಗೆದುಕೊಂಡ, ಖಾಕಿ ಗಣವೇಶ ಹಾಗು ಕೆಂಪು ಮುಂಡಾಸು, ಹೀಗೆ ಅನಿಸುತ್ತದೆ ಈಗಲೇ ಕವಾಯತು ಮಾಡುತ್ತಾ ಬರುತ್ತಿದ್ದಂತೆ,  ಮೋಹಸಿನನಿಗೆ ನೀರು ವಾಹಕ ಇಷ್ಟವಾಯಿತು, ಸೊಂಟ ಬಾಗಿ ಭುಜದ ಮೇಲೆ ಮಡಕೆ ಇಟ್ಟು ಒಂದು ಕೈಯಿಂದ ಅದನ್ನು ಹಿಡಿದು ಬರುತ್ತಿದ್ದಂತೆ, ಎಷ್ಟು ಸಂತೋಷದಲ್ಲಿದ್ದಾನೆ, ಬಹುಶಃ ಯಾವುದೇ ಗೀತೆ ಹಾಡುತ್ತಿದ್ದಂತೆ, ನೂರೆನಿಗೆ ವಕೀಲ ಇಷ್ಟವಾಯಿತು, ಎಷ್ಟು ಜ್ಞಾನ ಬೆಳಗುತ್ತಿದೆ ಮುಖದಲ್ಲಿ, ಕಪ್ಪು ಕೋಟ್, ಬಿಳಿ ಪ್ಯಾಂಟ್, ಪ್ಯಾಂಟಿನ ಜೇಬಲ್ಲಿ ಒಂದು ಗಡಿಯಾರ, ಸುವರ್ಣ ಚೈನ್, ಒಂದು ಕೈಯಲ್ಲಿ ಕಾನೂನಿನ ಪುಸ್ತಕ ಹಿಡಿದು, ಹೀಗೆ ಅನಿಸುತ್ತದೆ ಈಗ ತಾನೇ ಕೋರ್ಟಲ್ಲಿ ವಾದ ಮಾಡಿ ಬರುತ್ತಿದ್ದಂತೆ, ಇದೆಲ್ಲ ಎರಡು ಎರಡು ಪೈಸೆಯ ಆಟಿಕೆಗಳು, ಹಮೀದನ ಹತ್ತಿರ ಒಟ್ಟಿಗೆ ಕೇವಲ ಮೂರು ಪೈಸೆ ಇದೆ, ಇಷ್ಟು ಬೆಲೆಬಾಳುವ ಆಟಿಕೆ ಹೇಗಂತ ತೆಗೆದುಕೊಳ್ಳಲಿ? ಆಟಿಕೆ ಕೈಯಿಂದ ಬಿದ್ದರೆ ಚೂರು ಚೂರಾಗುವುದು, ಸ್ವಲ್ಪ ನೀರು ಬಿದ್ದರೆ ಅದರ ಎಲ್ಲ ರಂಗು ಹೋಗುವುದು, ಇಂತಹ ಆಟಿಕೆಯ ಅವನೇನು ಮಾಡಲಿ, ಏನು ಪ್ರಯೋಜನ?

ಮೋಹಸಿನ್ ಹೇಳುತ್ತಾನೆ "ನನ್ನ ನೀರು ವಾಹಕ ದಿನಾಲೂ ಬಂದು ನೀರು ಕೊಡುತ್ತಾನೆ ಹಗಲು ಸಂಜೆಗೆ."

ಮಹಮೂದ್ "ನನ್ನ ಸಿಪಾಯಿ ಮನೆಯ ಕಾವಲು ಇಡುವನು, ಯಾರು ಕಳ್ಳ ಬಂದರೆ ಕೂಡಲೇ ಬಂದೂಕಿನಿಂದ ಫಾಯರ್ ಮಾಡುವನು."

ನೂರೆ "ನನ್ನ ವಕೀಲ ತುಂಬಾ ಕೇಸ್ ವಹಿಸಿ ತುಂಬಾ ಕಾಸು ಗಳಿಸುವನು."

ಸಮ್ಮಿ "ನನ್ನ ಮಡಿವಾಳ ದಿನ ನನ್ನ ಬಟ್ಟೆ ಒಗೆಯಲು ಬರುವನು."

ಹಮೀದ್ ಆಟಿಕೆಗಳನ್ನು ನಿಂದಿಸುತ್ತಾನೆ "ಮಣ್ಣಿನ ತಾನೇ, ಬಿದ್ದರೆ ಚೂರು ಚೂರಾಗುವುದು" ಆದರೂ ತುಂಬಾ ಆಸೆಯಿಂದ ಆ ಆಟಿಕೆಗಳನ್ನು ನೋಡುತ್ತಿದ್ದ ಹಾಗು ಅದನ್ನು ಒಂದು ಸಲ ಕೈಯಿಂದ ಮುಟ್ಟಿ ಸ್ವಲ್ಪ ಸಮಯ ಹಿಡಿಯಲು ಬಯಸುತ್ತಿದ್ದ, ಅವನ ಕೈ ಸ್ವಯಂಪ್ರೇರಿತವಾಗಿ ಮುಂದೆ ಸಾಗಿತು, ಆದರೆ ಮಕ್ಕಳು ಅಷ್ಟು ಉದಾರ ಇರುವುದಿಲ್ಲ, ವಿಶೇಷವಾಗಿ ಅವರ ಹೊಸ ಆಸಕ್ತಿಯ ಸಂಧರ್ಭದಲ್ಲಿ, ಹಮೀದನ ಆಸೆ ಆಸೆಯಾಗಿಯೇ ಉಳಿಯಿತು.

ಆಟಿಕೆಯ ನಂತರ ಮಿಠಾಯಿ ಅಂಗಡಿ ಬರುತ್ತದೆ, ಯಾರು ಗುಲಾಬ್ ಜಾಮೂನ್ ತೆಗೆದುಕೊಂಡರು, ಯಾರು ಹಲ್ವಾ, ಯಾರು ಪೇಡ ಎಲ್ಲರು ಮೋಜಿನಿಂದ ತಿನ್ನುತ್ತಿದ್ದಾರೆ, ಹಮೀದ್ ಪಾಪ ಈ ತಂಡದಿಂದ ಪ್ರತ್ಯೇಕ ಇದ್ದಾನೆ, ನಿರ್ಭಾಗ್ಯ ಅವನ ಹತ್ತಿರ ಕೇವಲ ಮೂರು ಪೈಸೆ ಇರುವುದು, ಯಾಕೆ ಏನಾದರು ಖರೀದಿ ಮಾಡಿ ತಿನ್ನುವುದಿಲ್ಲ? ಆಸೆಯಿಂದ ಎಲ್ಲರ ಕಡೆ ನೋಡುತ್ತಾನೆ. 

ಮೋಹಸಿನ್ "ಹಮೀದ್ ತೆಗೋ ಪೇಡ, ಎಷ್ಟು  ಸುಗಂಧಿತ."

ಹಮೀದನಿಗೆ ಸಂಶಯ ಮೂಡಿತು, ಇದು ಕ್ರೂರ ವಿನೋದ ಅಷ್ಟೇ, ಮೋಹಸಿನ್ ಅಷ್ಟೇನೂ ಉದಾರ ಅಲ್ಲ, ಆದರೆ ಇದನ್ನು ತಿಳಿದು ಸಹ ಹಮೀದ್ ಅವನ ಹತ್ತಿರ ಹೋಗುತ್ತಾನೆ, ಮೋಹಸಿನ್ ತಟ್ಟೆಯಿಂದ ಒಂದು ಪೇಡ ತೆಗೆದು ಹಮೀದನತ್ತ ತನ್ನ ಕೈ ಮುಂದೆ ಸಾಗಿಸುತ್ತಾನೆಹಮೀದ್ ಕೈ ಚಾಚುತ್ತಾನೆ, ಮೋಹಸಿನ್ ತಟ್ಟನೆ ಪೇಡ ತೆಗೆದು ತನ್ನ ಬಾಯಿಯಲ್ಲಿ ಇಡುತ್ತಾನೆ, ಮಹಮೂದ್, ನೂರೆ , ಸಮ್ಮಿ ಎಲ್ಲರೂ ಚಪ್ಪಾಳೆ ತಟ್ಟಿ ತುಂಬಾ ನಗುತ್ತಾರೆ, ಹಮೀದ್ ನಾಚಿಕೆಯಿಂದ ದೂರ ಸರಿಯುತ್ತಾನೆ.

ಮೋಹಸಿನ್ "ಆಗಲಿ, ಈ ಸಲ ಖಂಡಿತ ಕೊಡುತ್ತೇನೆ ಹಮೀದ್, ಅಲ್ಲಾ ಆಣೆ, ಬಾ."

ಹಮೀದ್ "ನೀನೆ ಇಟ್ಟಿರು, ನನ್ನ ಹತ್ತಿರ ಏನು ಹಣ ಇಲ್ಲವೇ."

ಸಮ್ಮಿ "ಮೂರು ಪೈಸೆ ತಾನೇ ಇರುವುದು, ಮೂರು ಪೈಸೆಯಿಂದ ಏನೇನನ್ನು ತೆಗೆದುಕೊಳ್ಳುವೆ?"

ಮಹಮೂದ್ "ನನ್ನಿಂದ ಗುಲಾಬ್ ಜಾಮೂನ್ ತೆಗೆದುಕೊಂಡು ಹೋಗು ಹಮೀದ್, ಮೋಹಸಿನ್ ತುಂಬಾ ದುಷ್ಟನಾಗಿದ್ದಾನೆ."

ಹಮೀದ್ "ಮಿಠಾಯಿ ಅಷ್ಟೇನೂ ಮಹಾ, ಪುಸ್ತಕದಲ್ಲಿ ಇದರ ಬಗ್ಗೆ ಎಷ್ಟು ಕೆಟ್ಟ ಬರೆದಿದ್ದಾರೆ."

ಮೋಹಸಿನ್ "ಆದರೆ ಮನಸ್ಸಲ್ಲಿ ನೀನು ಹೇಳುತ್ತಿರಬಹುದು, ಕೊಟ್ಟರೆ ತಿಂದು ಬಿಡುವೆ ಎಂದು, ತನ್ನ ಪೈಸೆ ಯಾಕೆ ತೆಗೆಯುವುದಿಲ್ಲ?"

ಮಹಮೂದ್ "ಎಲ್ಲ ತಿಳಿದಿದ್ದೇನೆ ಇವನ ಕುತಂತ್ರ, ನಮ್ಮ ಎಲ್ಲ ಹಣ ಮುಗಿದಾಗ, ನಮಗೆ ತೋರಿಸಿ ತೋರಿಸಿ ತಿನ್ನುವನು."

ಮಿಠಾಯಿ ಅಂಗಡಿಯ ನಂತರ ಕಬ್ಬಿಣದ ಅಂಗಡಿ, ನಕಲಿ ಧಾತುವಿನ ಒಡವೆಗಳ ಅಂಗಡಿ, ಮಕ್ಕಳಿಗೆ ಇಲ್ಲಿ ಏನು ಆಕರ್ಷಣೆ ಇರಲಿಲ್ಲ, ಅವರೆಲ್ಲರು ಮುಂದೆ ಸಾಗಿದರು, ಹಮೀದ್ ಕಬ್ಬಿಣದ ವಸ್ತುವಿನ ಅಂಗಡಿಯಲ್ಲಿ ನಿಲ್ಲುತ್ತಾನೆ. ಅಲ್ಲಿ ಕಬ್ಬಿಣದ ಅನೇಕ ರೀತಿಯ ಚಿಮ್ಮಟಗಳನ್ನು ಇದ್ದವು, ಅವನಿಗೆ ಅಜ್ಜಿಯ ಬಳಿ ಚಿಮ್ಮಟ ಇಲ್ಲ ಎಂಬುವುದು ಜ್ಞಾಪಕ ಆಯಿತು, ತವೆಯ ಮೇಲಿಂದ ಚಪಾತಿ ತೆಗೆಯುವಾಗ ಅವಳ ಕೈ ಸುಟ್ಟು ಹೋಗುತ್ತದೆ, ಈ ಚಿಮ್ಮಟ ತೆಗೆದುಕೊಂಡು ಹೋದರೆ ಅಜ್ಜಿಗೆ ಎಷ್ಟು ಸಂತೋಷವಾಗಬಹುದು, ಮತ್ತೆ ಅವಳ ಬೆರಳುಗಳು  ಯಾವಗಲು ಸುಡುವುದಿಲ್ಲ, ಮನೆಯಲ್ಲಿ ಒಂದು ಕೆಲಸದ ವಸ್ತು ಬರುತ್ತದೆ, ಆಟಿಕೆಯ ಏನು ಪ್ರಯೋಜನ? ವ್ಯರ್ಥ ಹಣ ಹಾಳಾಗುತ್ತದೆ, ಸ್ವಲ್ಪ ಸಮಯದ ಮೋಹ, ನಂತರ ಆ ಆಟಿಕೆಯನ್ನು ಯಾರು ಕಣ್ಣು ಎತ್ತಿ ಸಹ ನೋಡುವುದಿಲ್ಲ, ಮನೆಗೆ ತಲುಪುವ ತನಕ ಅದು ಮುರಿದು ಹೋಗುವುದು. ಚಿಮ್ಮಟ ಎಷ್ಟು ಕೆಲಸದ ವಸ್ತು, ಚಪಾತಿ ತವೆಯಿಂದ ಕೆಳಗಿಳಿಸಿ, ಒಲೆಯಲ್ಲಿ ಬಿಸಿ ಮಾಡಿ, ಯಾರಾದರು ಗೆಂಡ ಕೇಳಲು ಬಂದರೆ, ತಟ್ಟನೆ ಅದರಿಂದ ತೆಗೆದು ಕೊಡಿ, ಅಮ್ಮನಿಗೆ ಪಾಪ ಎಲ್ಲಿ ಅಷ್ಟು ಸಮಯ ಮಾರುಕಟ್ಟೆ ಬರಲು ಮತ್ತು ಹಣ ಸಹ ಎಲ್ಲಿ ಇರುತ್ತದೆ, ದಿನನಿತ್ಯ ಅವಳ ಕೈ ಸುಟ್ಟು ಹೋಗುತ್ತದೆ.

ಹಮೀದನ ಸಂಗಡಿಗರು ಮುಂದೆ ಹೋಗಿ ಬಿಟ್ಟಿದ್ದಾರೆ, ಎಲ್ಲರು ಜ್ಯೂಸು ಅಂಗಡಿಯಲ್ಲಿ ನಿಂತು ಜ್ಯೂಸು ಕುಡಿಯುತ್ತಿದ್ದಾರೆ, ನೋಡಿ ಎಷ್ಟು ದುಷ್ಟರು, ಅಷ್ಟು ಮಿಠಾಯಿ ತೆಗೊಂಡರು, ಆದರೆ ಒಂದು ತುಂಡು ಸಹ ನನಗೆ ಕೊಡಲಿಲ್ಲ, ಮೇಲಿಂದ ಹೇಳುತ್ತಾರೆ ನಮ್ಮೊಟ್ಟಿಗೆ ಆಡು ಎಂದು, ನನ್ನ ಈ ಕೆಲಸ ಮಾಡು, ಆ ಕೆಲಸ ಮಾಡು, ಈಗ ಯಾರಾದರು ಯಾವುದೇ ಕೆಲಸ ಮಾಡಲು ಹೇಳಿದರೆ, ನಂತರ ನೋಡುವೆ, ತಿನ್ನಲಿ ಮಿಠಾಯಿ, ಬಾಯಿ ಕೊಳೆಯುತ್ತದೆ, ಬೊಕ್ಕೆಗಳಾಗುತ್ತದೆ, ತನ್ನಂತಾನೆ ನಾಲಿಗೆ ರುಚಿಮಯ ಆಗುತ್ತದೆ, ನಂತರ ಮನೆಯಲ್ಲಿ ಕಳ್ಳತನ ಮಾಡುವರು, ಪೆಟ್ಟು ತಿನ್ನುವರು. ಪುಸ್ತಕದಲ್ಲೇನು ಸುಳ್ಳು ಬರೆದಿದ್ದಾರ, ನನ್ನ ನಾಲಿಗೆ ಯಾಕೆ ಹಾಳಾಗುತ್ತದೆ, ಅಮ್ಮ ನಾನು ಚಿಮ್ಮಟ ತಂದುದನ್ನು ನೋಡಿ ಓಡಿ ಬಂದು ನನ್ನ ಕೈಯಿಂದ ತೆಗೆದು ಕೊಳ್ಳುವಳು ಮತ್ತೆ ಹೇಳುವಳು "ನನ್ನ ಮುದ್ದು ಮಗ ನನಗೋಸ್ಕರ ಚಿಮ್ಮಟ ತಂದಿದ್ದಾನೆ."
(ಮುಂದುವರಿಯುವುದು)

 ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

1 comment:

  1. ಒಂದು ಪೈಸೆ ಕೊಟ್ಟು ಸವಾರಿ, ಅರೆರೆ ಆ ಕಾಲ ಏನು ಚೆಂದ ಇತ್ತು ರೀ!
    ಮಕ್ಕಳ ಅಟಿಕೆಗಳ ಮಾತು ನನಗೆ ನನ್ನ ಬಾಲ್ಯದ ಆಟಗಳನ್ನು ನೆನಪಿಸಿತು.
    ಚಿಮ್ಮಟ ಕಂಡ ಆ ತಾಯಿಯ ಖುಷಿ ಕಣ್ಣಿಗೆ ಕಟ್ಟುವಂತಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...