Tuesday, July 8, 2014

ನೀನು ಚಂದಿರ ನಾನು ಬೆಳದಿಂಗಳು

ನೀನು ಚಂದಿರ
ನಾನು ಬೆಳದಿಂಗಳು
ನೀನು ಮರ
ನಾನು ಶಾಖೆ
ನೀನು ಮುಗಿಲು
ನಾನು ಮಿಂಚು
ನೀನು ಹಕ್ಕಿ
ನಾನು ಕದಿರು

ನೀನು ಮುಗಿಲು
ನಾನು ಮಿಂಚು
ನೀನು ಹಕ್ಕಿ
ನಾನು ಕದಿರು

ನೀನು ಚಂದಿರ
ನಾನು ಬೆಳದಿಂಗಳು

ಸರೋವರ ಇಲ್ಲ
ಬಾವಿ ಇಲ್ಲ
ತಂಪು ನೆರಳಿಲ್ಲ
ಕೋಗಿಲೆ ಇಲ್ಲ
ಇಂಚರಕ್ಕಿ ಇಲ್ಲ
ಹೀಗೆ ನನ್ನ ಊರು ನಲ್ಲ
ಎಲ್ಲಿ ತಣಿಯುವುದು ಮೈಯ ತಾಪ
ಓ ನಲ್ಲ ಶಿರಗೌರ
ಚಂದ್ರ ಕಿರಣವನ್ನು ಬಿಟ್ಟು
ಎಲ್ಲಿಗೆ ಹೋಗುವುದು ಚಕೋರ
ಇನಿಯ ನನ್ನ ತಾರುಣ್ಯದ ದಾಹ ಎದ್ದಿದೆ
ನಲ್ಲ ಬೆಂಬೂದಿ ಸಹ ಇಂದೂ
ಮಧುಚಂದ್ರವೆಂದು ಬಾಸವಾಗುತ್ತಿದೆ

ನೀನು ಚಂದಿರ.....

ಸೆರಗಲ್ಲಿ ನಾನಿಡುವೆ
ಓ ಇನಿಯ ನಿನ್ನನ್ನು
ಕಪ್ಪು ಗುಂಗುರು ಕೇಶದಿಂದ
ಕಟ್ಟುವೆ ಈ ಕಾಲನ್ನು
ಅಲಿಂಗನದಲಿ ಹೀಗೆ ಬಂಧಿಸುವೆ
ಅಂದರೆ ಬಿಡಿಸಲಾಗದು
ನಿನ್ನ ಕನಸು ನಲ್ಲ ಈಗ ಮುರಿಯದು
ಮೆಹಂದಿ ರಚಿಸಲಾಗಿದೆ ನನ್ನ ಈ ಕೈಗಳಿಗೆ
ನನ್ನ ಕಂಗಳಲಿ ತುಂಬಿದೆ ಕಾಡಿಗೆ
ಕ್ಷಣ ಕ್ಷಣ ನಿನ್ನನ್ನು ಕರೆಯುವೆ
ಇನಿಯ ಕ್ಷಣ ಕ್ಷಣ ನಿನ್ನನ್ನು ಕರೆಯುವೆ
ನೆಮ್ಮದಿ ಇಲ್ಲದೆ

ನೆಮ್ಮದಿ ಇಲ್ಲದೆ

ನೀನು ಚಂದಿರ.....

ಓ ನನ್ನ ಪ್ರೀಯತಮ
ಓ ನನ್ನ ಹಣೆ ಕುಂಕುಮ
ಪ್ರೀಯತಮ ಜೊತೆ ಪ್ರೀಯತಮೆಯಾದೆ
ಮಯೂರ ನಿಸರ್ಗ ಜೊತೆ
ಬೆಳದಿಂಗಳ ರಾತ್ರಿ ನನ್ನೊಟ್ಟಿಗೆ ಕಳೆ ನೀನು
ತನ್ನ ಕೈಯಿಂದ ನನಗೆ ಉಡಿಸು ಕೆಂಪು ಸೆರಗನು
ಧರತಿ ಕೇಸರಿ ಕಾಣುತ್ತಿದೆ
ಅಂಬರ ಕೆಂಪು ಕೆಂಪೇರಿದೆ
ನಲ್ಲ ಅಪ್ಪಿಕೊಂಡು ನನ್ನನ್ನು
ಪ್ರಸನ್ನಗೊಳಿಸು ನನ್ನನ್ನು

ನೀನು ಚಂದಿರ.....

ಮೂಲ : ಬಾಲ್ ಕವಿ ಬೈರಾಗಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಜೈದೇವ್
ಚಿತ್ರ : ರೇಶ್ಮ ಆರ್ ಶೇರಾ


तू चंदा मैं चांदनी, तू तरुवर मैं शाख रे
तू बादल मैं बिजुरी, तू पंछी मैं पात रे

ना सरोवर, ना बावड़ी, ना कोई ठंडी छांव
ना कोयल, ना पपीहरा, ऐसा मेरा गांव रे
कहाँ बुझे तन की तपन, ओ सैयां सिरमोड़
चंद्र-किरन को छोड़ कर, जाए कहाँ चकोर
जाग उठी है सांवरे, मेरी कुँवारी प्यास रे
(पिया) अंगारे भी लगने लगे, आज मुझे मधुमास रे

तुझे आंचल मैं रखूँगी ओ सांवरे
काली अलकों से बाँधूँगी ये पांव रे
गल बैयाँ वो डालूं की छूटे नहीं
तेरा सपना साजन अब टूटे नहीं
मेंहदी रची हथेलियाँ, मेरे काजर-वारे नैन रे
(पिया) पल पल तुझे पुकारते, हो हो कर बेचैन रे

ओ मेरे सावन साजन, ओ मेरे सिंदूर
साजन संग सजनी बनी, मौसम संग मयूर
चार पहर की चांदनी, मेरे संग बिता
अपने हाथों से पिया मोहे लाल चुनर उढ़ा
केसरिया धरती लगे, अम्बर लालम-लाल रे
अंग लगा कर साहेबा रे, कर दे मुझे निहाल रे
तू चंदा मैं चांदनी...
http://www.youtube.com/watch?v=vh1-Ba-Hnhw

2 comments:

  1. ಸುನೀಲ್ ದತ್ ನಿರ್ಮಾಣ ನಿರ್ಧೇಶನದ ಈ ಚಿತ್ರಕ್ಕೆ ಕನ್ನಡಿಗ ಎಸ್. ರಾಮಚಂದ್ರರ ಛಾಯಾಗ್ರಹಣವಿತ್ತು.

    ಬಾಲ್ ಕವಿ ಬೈರಾಗಿ ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇನೆ. ತಮ್ಮ ಭಾವಾನುವಾದವೂ ಚೆನ್ನಾಗಿದೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...