Saturday, July 26, 2014

ಬಿಂದುವಿಂದ ಬಿಂದು ತನಕ ಗೆರೆ ಎಳೆ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಒಂದು ಹೊಸ ದಾರಿ ನಿರ್ಮಾಣವಾಗಲಿ
ಮನಸ್ಸಿಂದ ಮನಸ್ಸು ಸೇರಲಿ
ಜಗತ್ತು ಹಸಿರಲಿ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಹೊಸ ಧೈರ್ಯ ಹುಟ್ಟಲಿ
ಅತ್ಯಾಚಾರ ಮಾಡುವವರನ್ನು ಮುಗಿಸಲಿ
ಹೆಣ್ಣೆಂಬ ಪಾವನ ಸೊತ್ತು ಸುರಕ್ಷಿತವಾಗಲಿ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಹುಚ್ಚು ವಿಚಾರ ಬರದಿರಲಿ
ಮನಸ್ಸು ನಿರ್ಮಲವಾಗಲಿ
ಬದುಕು ಸಾರ್ಥಕವಾಗಲಿ

ಬಿಂದುವಿಂದ ಬಿಂದು ತನಕ ಗೆರೆ ಎಳೆ
ಯಾರೂ ಪರಕೀಯರಲ್ಲವೆಂಬ ಭಾವನೆ ಹುಟ್ಟಲಿ
ಎಲ್ಲರೂ ನಿನ್ನವರೆ ಎಂಬ ವಿಚಾರವಿರಲಿ
ಪ್ರೀತಿ ವಿಶ್ವಾಸ ಬೆಳೆಯಲಿ

by ಹರೀಶ್ ಶೆಟ್ಟಿ,ಶಿರ್ವ

1 comment:

  1. ಭಗವಂತನೆಂಬೊಂದು ಬಿಂದು
    ಇಲ್ಲಿ ನಾನೆಂಬ ನಾನೆಂಬ ಬಿಂದು
    ಎಳೆದ ಗೆರೆಯದು ನೇರಾನೇರ...

    ಇಂದಿನ ಕುತ್ಸಿತ ಮನಸುಗಳ ಶುದ್ಧೀಕರಣಕ್ಕೆ ಹಂಬಲಿಸುವ ನಿಮ್ಮ ಕವಿ ಮನಸಿಗೆ ಶರಣು.
    ಒಳ್ಳೆಯ ಕವನವಿದು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...