Tuesday, February 25, 2014

ಬರಹ

ಅವನು ಪುಸ್ತಕ ತೆರೆದು ನೋಡಿದ
ಬರಹಗಳೆಲ್ಲ ಅಳುತ್ತಿದ್ದವು
ಓದುಗರಿಲ್ಲದೆ 
---------

ಭಾವಗಳ ನದಿ ಹರಿಯುತ್ತಿತ್ತು 
ಆದರೆ ಬರಹದ ದೋಣಿ ತೇಲಲಿಲ್ಲ 
ಬರಹಗಳು ತುಂಬಿ ತುಳುಕುತ್ತಿತ್ತು

----------

ಅರ್ಥವಾಗದ ಬರಹ
ತುಂಬಾ ಜನ ಭೇಷ್ ಭೇಷ್ ಎಂದು ಹೊಗಳಿದರು
ಕವಿಗೆ ಆಶ್ಚರ್ಯ ಅಂಥದೇನು ಬರೆದೆಯೆಂದು

---------

ಕವಿಗೆ ಫೇಸ್ ಬುಕ್'ಲ್ಲಿ ಲೈಕ್ ಒತ್ತುವ
ಅಭಿಮಾನಿಯ ಭೇಟಿ
ಅಭಿಮಾನಿ ಹೋದ ಮೇಲೆ ತಿಳಿಯಿತು
ಅವನ ಹೆಚ್ಚಿನ ಕವನಗಳನ್ನು ಅವನು ಓದಲೇ ಇಲ್ಲವೆಂದು

--------

ಅವನು ಒಳ್ಳೆ ಬರೆಯುತ್ತಿದ್ದ
ಮನಸ್ಸಲ್ಲಿ ಬಂದ ಭಾವಗಳನ್ನು
ಕಾಗದಕ್ಕೆ ಚೆಲ್ಲುತ್ತಿದ್ದ
ಕತೆ, ಕವನ, ಹನಿ, ಚುಟುಕು, ಹಾಯ್ಕು
ಏನೆಂದು ತಿಳಿಯುವ ಗೋಚರಕ್ಕೆ ಅವನು ಹೋಗಲಿಲ್ಲ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಇಂದಿನ ಕವಿ ಮತ್ತು ಓದುಗನ ನಿಜ ಸ್ಥಿತಿಯ ಅನಾವರಣ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...