Saturday, May 5, 2012

ಬೇಸರ

ಬೇಸರ ಅವರಿಂದ ಅಲ್ಲ
ಅವರ ವರ್ತನೆಯಿಂದ
ಮೊಗ್ಗು ಹೂವಾಗುವ ಮುಂಚೆ
ಕಿತ್ತು ಬಿಸಾಕಿ ಬಿಟ್ಟರು

ಬೇಸರ ಅವರಿಂದ ಅಲ್ಲ
ಅವರ ಅಹಂಕಾರದಿಂದ
ನಾನೇ ನಾನು ನೀನು ಯಾರು
ನನ್ನ ಕೇಳದಿದ್ದರೆ ನೀ ಆಗುವೆ ಗಡಿ ಪಾರು

ಬೇಸರ ಅವರಿಂದ ಅಲ್ಲ
ಅವರ ಅಭಿಮಾನದಿಂದ
ನಾನು ಶ್ರೇಷ್ಠ ನೀನು ಸಾಮಾನ್ಯ
ನಾನು ಗಣ್ಯ ನೀನು ಅಗಣ್ಯ

ಬೇಸರ ಅವರಿಂದ ಅಲ್ಲ
ಅವರ ಅವಿವೇಕಿತನದಿಂದ
ತಪ್ಪು ಸರಿಯ ಅರಿವಿಲ್ಲ
ನಾನು ಜ್ಞಾನಿ ನಿನಗೇನೂ ಗೊತ್ತಿಲ್ಲ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...