Thursday, May 10, 2012

ನೆನಪಿನ ದ್ವಾರ

ಮುಚ್ಚಿದೆ ನಾನು ನಿನ್ನ ನೆನಪಿನ ದ್ವಾರ
ಬೇಡ ಇನ್ನು ಬೇಡ
ಈ ಅನವಶ್ಯಕ ವೇದನೆ ನೀಡುವ ಚಾಳಿ 
ಪಡೆಯುತ್ತಿದ್ದೆ ನಾ ಸುಖ ಮಧುರ
ನೆನಪ ತಂಗಾಳಿ
ಮರೆಯುತ್ತಿದ್ದೆ ಎಲ್ಲ ಕಷ್ಟಗಳ ಹಾವಳಿ
ಮುಳುಗುತ್ತಿದ್ದೆ ನಿನ್ನ ಕನಸಲಿ !

ಆದರೆ ಈಗ ಮುಚ್ಚಿದೇನೆ ಈ ದ್ವಾರ
ನಿನ್ನ ಸ್ಮೃತಿ ಬರಲಾರದು
ಯಾಕೆಂದರೆ
ನಿನ್ನ ನೆನಪ ಸಂಗಡ ಬರುತ್ತಿತ್ತು
ಉದುರಿದ ಶರತ್ಕಾಲದ ಹಳದಿ ಎಲೆಗಳು
ಟೊಳ್ಳು ಶಬ್ದಗಳ ಒಣಗಿದ ಶಾಖೆಗಳು
ನೀರಸವಾದ ಕ್ಷಮೆಗಳು
ಬೇಡಾದ ಆಪಾದನೆಗಳು
ದೂರ ಸರಿಸುತ್ತಿರುವ ಬೇಸರಗೊಳಿಸುವ ಧೂಳುಗಳು
ವ್ಯಂಗದ ಶೂಲಗಳು !

ಹೌದು ಮುಚ್ಚಿದ್ದೇನೆ ನಾನು
ಈಗ ಈ ದ್ವಾರ
ಬರಲಾರದು ಇನ್ನು
ನಿನ್ನ ನೆನಪಿನ ಮೂಡಲಗಾಳಿ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...