Sunday, May 27, 2012

ಯಾರವನು

ಯಾರವನು
ಕ್ಷಣಾರ್ಧದಲ್ಲಿ ಕಣ್ಣೆದುರಿಗೆ
ಬಂದು ಹೃದಯ ಕದ್ದು ಹೋದ
ಕತ್ತಲ ಬದುಕಲಿ
ದೀಪ ಬೆಳಗಿಸಿ ಹೋದ!

ಯಾರವನು
ರಿಕ್ತ ಕಣ್ಣಲ್ಲಿ ಅನೇಕ ಸ್ವಪ್ನ
ನೀಡಿ ಹೋದ
ಕುಗ್ಗಿದ ಮನಸ್ಸಲಿ
ಉತ್ಸವದ ಆನಂದ ಕೊಟ್ಟು ಹೋದ!

ಯಾರವನು
ಗೂಡಲ್ಲಿದ್ದ ಹಕ್ಕಿಯನ್ನು
ನೀಲ ಗಗನದಲಿ ಹಾರಿಸಿ ಹೋದ
ಬಣ್ಣರಹಿತ ಜೀವನದಲಿ
ಕಾಮನಬಿಲ್ಲಿನ ಬಣ್ಣ ತುಂಬಿ ಹೋದ!

ಯಾರವನು
ತಳಮಳ ಮನ ಸಾಗರದಲಿ
ಶಾಂತತೆ ಪಸರಿಸಿ ಹೋದ
ಮೊದಲ ಮಳೆಯ ಮಣ್ಣಿನ ಸುಗಂಧದಂತೆ
ತನ್ನ ಕಂಪು ಹರಡಿ ಹೋದ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...