Thursday, December 22, 2011

ಗಲ್ಲು ಹಾಗು ಇತರ ಕಥೆಗಳು

ಗಲ್ಲು
-------
ಅವನು ಅನೇಕ ಕೊಲೆ ಮಾಡಿದ ಕೊಲೆಗಾರ.
ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.
 ಗಲ್ಲಿಗೆ ಏರಿಸುವಾಗ ಅವನ ಹತ್ತಿರ ಕೇಳಲಾಯಿತು  "ಇಂದು ನಿನ್ನ ಜೀವನದ ಅಂತಿಮ ದಿವಸ, ನಿನಗೆ ಏನು ಹೇಳಲಿದೆಯಾ ?
ಅವನು ಹೇಳಿದ "ನಾನು ಮೊದಲ ಕೊಲೆ ಮಾಡಿದ ದಿನವೇ ನಾನು ಸತ್ತಿದೆ, ಈಗ ನೀವು ಗಲ್ಲಿಗೆ ಏರಿಸುವುದು ನನ್ನ ಶರೀರವನ್ನು ಮಾತ್ರ " .
________________________
ಅಪರಾಧ
------------
ಅವನ ಅಪರಾಧ ಸಾಬೀತಾಯಿತು.
ಯಾರೋ ಅವನಿಗೆ ಕೇಳಿದರು.
"ನೀನು ಮಾಡಿದ ಅಪರಾಧ ಏನು ?
ಅವನು " ನನ್ನ ಅಪರಾಧ ನ್ಯಾಯಾಲಯದಲ್ಲಿ ಸತ್ಯ ಹೇಳಿದ್ದು" 
_________________________
ವಂಚಕ
----------
ಅವನು ವಂಚಕ .
ಅವನು ಜನರನ್ನು ತನ್ನ ಜಾಣತನದಿಂದ ವಂಚಿಸಿ ಇಡಿ ಜೀವನ ಸಾಗಿಸಿದ.
ಈಗ ಅವನು ಮುದುಕ.
ಯಾರೋ ಅವನಿಗೆ ಕೇಳಿದರು.
"ನೀನು ನಿನ್ನ ಈ ಜಾಣತನವನ್ನು ಒಳ್ಳೆ ಕೆಲಸಕ್ಕೆ ಯಾಕೆ ಉಪಯೋಗಿಸಲಿಲ್ಲ "
ಅದಕ್ಕೆ ಅವನು ನಗುತ ಹೇಳಿದ  " ಮೊದಲು ನಾನು ಒಳ್ಳೆ ಕೆಲಸ ಮಾಡಲು ಹೋಗಿದ್ದೆ,  ಜನರು ನಾನು ಅವರಿಗೆ ಮೋಸ  ಮಾದುತ್ತಿದ್ದೇನೆ  ಎಂದು ತಿಳಿದು ನನ್ನನ್ನು ತಿರಸ್ಕರಿಸಿದರು ".
______________________
ಕಪಟ
--------
ಅವನು ಕಪಟಿ .
ಅವನ ಕಪಟತನ ಜನರ ಮುಂದೆ ಬಹಿರಂಗ ವಾಯಿತು.
ಯಾರೋ ಅವನಿಗೆ ಕೇಳಿದರು.
"ನಿನ್ನ ಈ ಕಪಟತನದಿಂದ ಎಷ್ಟೋ ಜನರನ್ನು ಮೂರ್ಖ ಮಾಡಿದಿ ಅಲ್ಲವೇ "
ಅವನು " ನಾನು ಮೂರ್ಖ ಮಾಡಿದು ಅಲ್ಲ ಅವರೇ ಮೂರ್ಖರಾದದ್ದು".

by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...